top of page

ಪಿತೃಪಕ್ಷದಲ್ಲಿ ಸಂಕ್ಷಿಪ್ತ ದೇವ ಋಷಿ ಪಿತೃ ತರ್ಪಣ ವಿಧಾನ



ಓಂ ಅರ್ಯಮಾಣ ತೃಪ್ಯಾಂತಾಮ್ ಇದಂ ತಿಲೋದಕಂ ತಸ್ಮೈ ಸ್ವಧಾ ನಮಃ | ಓಂ ಮೃತ್ಯೋರ್ಮಾ ಅಮೃತಂ ಗಮಯ ||


ಪಿತೃಗಳಲ್ಲಿ ಅರ್ಯಮಾ ಶ್ರೇಷ್ಠರಾಗಿದ್ದಾರೆ. ಅರ್ಯಮಾ ಪಿತೃಗಳ ದೇವತೆ. ಅರ್ಯಮನನ್ನು ನಮಿಸುತ್ತೇನೆ. ಓ! ತಂದೆ, ಅಜ್ಜ, ಮತ್ತು ಮುತ್ತಜ್ಜ, ಓ! ತಾಯಿ, ಅಜ್ಜಿ ಮತ್ತು ಮುತ್ತಜ್ಜಿ, ನಿಮಗೆ ಪುನಃ ಪುನಃ ನಮಿಸುತ್ತೇನೆ. ನೀವು ನಮ್ಮನ್ನು ಮೃತ್ಯುವಿನಿಂದ ಅಮೃತದೆಡೆಗೆ ಕರೆದೊಯ್ಯಿರಿ.


ವಿಧಿ:-


ಎರಡು ಕೈಗಳ ತರ್ಜನಿಯ ಬೆರಳಿಗೆ ಬಂಗಾರ, ಬೆಳ್ಳಿಯ ಅಥವಾ ಕುಶದಿಂದ ತಯಾರಿಸಿದ ಉಂಗುರವನ್ನು ಧರಿಸಿ, ತರ್ಪಣದ ಸಮಯದಲ್ಲಿ ತಾಮ್ರ ಅಥವಾ ಬೆಳ್ಳಿ ಪಾತ್ರೆಗಳನ್ನು ಮಾತ್ರ ಬಳಸಿ.


ಬಲಗೈಯಲ್ಲಿ ಹೂವು, ಅಕ್ಷತ, ತಿಲ ಮತ್ತು ಜಲವನ್ನು ಹಿಡಿದು ಸಂಕಲ್ಪ ಮಾಡಿರಿ.


"ಓಂ ವಿಷ್ಣುಃ ವಿಷ್ಣುಃ ವಿಷ್ಣುಃ (ನಿಮ್ಮ ಹೆಸರು, ಗೋತ್ರ) ಶ್ರುತಿ ಸ್ಮೃತಿ ಪುರಾಣೋಕ್ತ ಫಲ ಪ್ರಾಪ್ತ್ಯರ್ಥಂ ದೇವ ಋಷಿ ಪಿತೃ ತರ್ಪಣಂ ಕರಿಷ್ಯೇ|"


ಕೆಳಗಿರುವ ಮಂತ್ರವನ್ನು ೩ ಬಾರಿ ಹೇಳಿರಿ:


ಓಂ ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ |

ನಮಃ ಸ್ವಾಹಾಯೈ ಸ್ವಧಾಯೈ ನಿತ್ಯಮೇವ ನಮೋನಮಃ ||


ಆವಾಹನ ಮಂತ್ರ:


ಬ್ರಹ್ಮಾದಯಃ ಸುರಾಃ ಸರ್ವೇ ಋಷಯಃ ಸನಕಾದಯಃ |

ಆಗಚ್ಛಂತು ಮಹಾಭಾಗಾ ಬ್ರಹ್ಮಾಂಡೋದರವರ್ತಿನಃ ||

ಓಂ ಆಗಚ್ಛಂತು ಮೇ ಪಿತರ ಇಮಂ ಗೃಹ್ಣಂತು ಜಲಾಂಜಲಿಮ್ |


ಗಂಗಾಜಲದಲ್ಲಿ ನೀರು ಸೇರಿಸಿ, ಬಿಳಿ ಚಂದನ, ಅಕ್ಷತೆ, (ಜೋಳ ಮತ್ತು) ಕಪ್ಪು ತಿಲಗಳನ್ನು ಸೇರಿಸಿ ತರ್ಪಣ ಮಾಡಿರಿ.

ಪೂರ್ವದ ಕಡೆ ಮುಖ ಮಾಡಿ ಹೆಬ್ಬೆರಳಿನಿಂದ ನೀರು ಅರ್ಪಿಸಿರಿ.


ಓಂ ಬ್ರಹ್ಮಾದಯೋ ದೇವಾಸ್ತೃಪ್ಯಾಂತಾಮ್ – ೧ ಬಾರಿ ಅರ್ಪಿಸಿರಿ.

ಓಂ ಭೂರ್ದೇವಾಸ್ತೃಪ್ಯಾಂತಾಮ್ – ೧ ಬಾರಿ ಅರ್ಪಿಸಿರಿ.

ಓಂ ಭುವರ್ದೇವಾಸ್ತೃಪ್ಯಾಂತಾಮ್ – ೧ ಬಾರಿ ಅರ್ಪಿಸಿರಿ.

ಓಂ ಸ್ವರ್ದೇವಾಸ್ತೃಪ್ಯಾಂತಾಮ್ – ೧ ಬಾರಿ ಅರ್ಪಿಸಿರಿ.


ಉತ್ತರದ ಕಡೆ ಮುಖ ಮಾಡಿ, ಕೈಯಿಂದ ನೀರು ಅರ್ಪಿಸಿರಿ.

ಓಂ ಸನಕಾದಿ ಮನುಷ್ಯಾಸ್ತೃಪ್ಯಾಂತಾಮ್ – ೨ ಬಾರಿ.


ನಂತರ ದಕ್ಷಿಣದ ಕಡೆ ಮುಖ ಮಾಡಿ, ಬೆರಳಿನ ಮಧ್ಯದಲ್ಲಿ (ಅಂಗುಷ್ಟ ಮತ್ತು ತರ್ಜನಿ) ನೀರು ಅರ್ಪಿಸಿರಿ.


ಓಂ ಕವ್ಯವಾಙ್ಗಮಯೋ ದೇವ ಪಿತರಸ್ತೃಪ್ಯಂತಾಮ್ – ೩ ಬಾರಿ.

ಓಂ ಭೂರ್ಭುವಸ್ವಃ ಪಿತರಸ್ತೃಪ್ಯಂತಾಮ್ – ೩ ಬಾರಿ.

ಓಂ ಅಸ್ಮಿನ್ ಪಿತೃ ಪಿತಾಮಹ ಪ್ರಪಿತಾಮಹಸ್ತೃಪ್ಯಂತಾಮ್ – ೩ ಬಾರಿ.

ಓಂ ಅಸ್ಮಿನ್ ಮಾತಾಮಹ ಪ್ರಮಾತಾಮಹ ವೃದ್ಧಪ್ರಮಾತಾಮಹಸ್ತೃಪ್ಯಂತಾಮ್ – ೩ ಬಾರಿ.


ನಂತರ ನಿರಂತರವಾಗಿ ಪಿತೃತೀರ್ಥದಲ್ಲಿ ಬೆರಳಿನಿಂದ ನೀರು ಹಾಯಿಸಿ:


"ಓಂ ಆಯಂತು ನಃ ಪಿತರಃ ಸೋಮ್ಯಾಸೋ ಅಗ್ನಿಷ್ವಾತ್ತಾಃ ಪಥಿಭಿರ್ದೇವಯಾನೈಃ |

ಅಸ್ಮಿನ್ ಯಜ್ಞೇ ಸ್ವಧಯಾ ಮದಂತೋ ಅಧಿಬ್ರುವಂತು ತೇ ಅವಂತ್ವಸ್ಮಾನ್ ||"


ಪಿತೃಗಳಿಗೆ ಮತ್ತು ಪಿತಾಮಹಗಳಿಗೆ ತರ್ಪಣ ಮಾಡಿ, ಸಮರ್ಪಣೆ ಮಾಡಿ.

ನಂತರ ತರ್ಪಣ ಮಾಡಿದ ನೀರನ್ನು ತಲೆಯ ಮೇಲೆ ಅಥವಾ ಮುಖದ ಮೇಲೆ ಹಾಕಿಕೊಳ್ಳಿ.


ಓಂ ಅಚ್ಯುತಾಯ ನಮಃ | ಮಂತ್ರವನ್ನು ೩ ಬಾರಿ ಜಪಿಸಿರಿ.

ನಂತರ ಸೂರ್ಯನಿಗೆ ಗಾಯತ್ರಿ ಮಂತ್ರದೊಂದಿಗೆ ನೀರು ಅರ್ಪಿಸಿರಿ ಮತ್ತು ಎಲ್ಲಾ ದಿಕ್ಕುಗಳಿಗೆ ನಮಸ್ಕಾರ ಮಾಡಿ.


ಸಮರ್ಪಣೆ:


ಕೆಳಗಿನ ವಾಕ್ಯವನ್ನು ಓದಿ ತರ್ಪಣ ಕಾರ್ಯವನ್ನು ಭಗವಂತನಿಗೆ ಸಮರ್ಪಿಸಿ:


"ಅನೇನ ಯಥಾಶಕ್ತಿ ಕೃತೇನ ದೇವರ್ಷಿ ಮನುಷ್ಯ ಪಿತೃತರ್ಪಣಾಖ್ಯೇನ ಕರ್ಮಣಾ ಭಗವಾನ್‌ ಮಮ ಸಮಸ್ತಪಿತೃ ಸ್ವರೂಪಿ ಜನಾರ್ದನ ವಾಸುದೇವಃ ಪ್ರೀಯತಾಂ ನ ಮಮ್|"


ಅಥವಾ "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳಿ.


"ಓಂ ವಿಷ್ಣವೇ ನಮಃ| ಓಂ ವಿಷ್ಣವೇ ನಮಃ| ಓಂ ವಿಷ್ಣವೇ ನಮಃ|"


-ಹೇಮಂತ್ ಕುಮಾರ್ ಜಿ


35 views0 comments

Comments

Rated 0 out of 5 stars.
No ratings yet

Add a rating
bottom of page