top of page

ಪಂಜುರ್ಲಿ ಯತಿವರೇಣ್ಯ ಅಣ್ಣಪ್ಪಯ್ಯನವರು

🙏🔥 ಪಂಜುರ್ಲಿ 🔥🙏


🕉️ ಯತಿವರೇಣ್ಯ ಅಣ್ಣಪ್ಪಯ್ಯನವರು 🕉️


✡️ ಸಿರಿಭೂವಲಯ ✡️


ಅಂದೊಮ್ಮೆ ನಡೆಯಿತು ಸೌತ್ರಾಮಣಿ ಗವಾಮಯನ ಯಾಗ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಯ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ..


ಪ್ರಕಟವಾಯಿತು ಹಲವು ಸಾಧಕರ ಜೀವನ ಚರಿತೆ ನಮ್ಮ ಗುರುವರ್ಯ ಯಾಗ ನಿರ್ದೇಶಕ ಬ್ರಹ್ಮ ಋಷಿ ಪಟ್ಟ ಹೊತ್ತ ವೇದ ಕೃಷಿಕ ಕೆ.ಎಸ್. ನಿತ್ಯಾನಂದರಿಗೆ ಅಗ್ನಿಮುಖದಲಿ..


ದೇವ, ಋಷಿ, ಅಗ್ನಿಗಳೊಟ್ಟಿಗೆ ಸಂವಹನ ನಡೆಸುವ ವಿಧ್ಯೆ, ಪ್ರತ್ಯಕ್ಷ ದೃಶ್ಯ ಕಾಣುವ ವಿಧ್ಯೆ ಬಳಸುವನಾತ ನಾಥ ಸಂಪ್ರದಾಯದ ೬ ವರುಷದ ವಟುವೆನ್ನುವ ೩೬೦ ಸಂವತ್ಸರಗಳ ದಾಟಿ ಬಂದಿಹ ೬೦ಕ್ಕೊಂದು ವರುಷ ಎನ್ನುವ ಬಾಲಬಪ್ಪನಿಗೆ ದರುಶನವಿತ್ತರು ಬ್ರಹ್ಮ ಋಷಿ ವಸಿಷ್ಠರ ಅಂಶದಲಿ ಎರಡೂವರೆ ಸಾವಿರ ವರುಷಗಳ ಹಿಂದೆ ಜನಿಸಿ ವೇದಧರ್ಮವ ಉಳಿಸಿ ಬೆಳೆಸಿದ ಯತಿವರೇಣ್ಯ ಅಣ್ಣಪ್ಪಯ್ಯರು. ಪ್ರತ್ಯಕ್ಷ ಕಂಡರೂ ಪರಾಮರ್ಶಿಸಿ ನೋಡೆಂಬ ಮೀಮಾಂಸೆಯ ಬದ್ಧತೆಗಾಗಿ ಖೇಚರೀ ವಿಧ್ಯೆ ಅಂದರೆ ಆ ಕಾಲಕ್ಕೆ ಪಯಣಿಸಿ ಅಣ್ಣಪ್ಪಯ್ಯನವರ ಚರಿತೆಯನ್ನು ಪ್ರಮಾಣೀಕರಿಸಿ ದಾಖಲಿಸುತ್ತಾರೆ. ಅದಕ್ಕೂ ಪ್ರಮಾಣದ ರೂಪದಲ್ಲಿ ಪ್ರಾಚೀನ ಜಾನಪದೀಯ ಮತ್ತು ಸಾಹಿತ್ಯಕ ದಾಖಲೆಗಳನ್ನೂ ಸಂಗ್ರಹಿಸುತ್ತಾರೆ.



ಅಖಂಡ ಭಾರತದೆಲ್ಲೆಡೆ ಸಂಚರಿಸಿ ವೇದನಿಂದಕರ, ದೇವನಿಂದಕರ, ಧರ್ಮನಿಂದಕರ ಸಾಮ, ದಾನ, ಭೇದ, ದಂಡ ಹಿಡಿದು ಚಕ್ರವರ್ತಿಯನ್ನೂ ಬಗ್ಗುಬಡಿದು ಸರಿದಾರಿಗೆ ತಂದ ಮಹಾನ್ ಋಷಿವರರು ಪಂಜುರ್ಲಿ, ವರಾಹರೂಪೀ, ಅಣ್ಣಪ್ಪಸ್ವಾಮಿ, ಸತ್ಯದೇವತೆ, ಸಚ್ದೇವ್, ನ್ಯಾಯದೇವತೆ, ಮಂತ್ರದೇವತೆ ಇತ್ಯಾದಿ ಹಲವು ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಸಾವಿರ ಸಾವಿರರೋಪಾದಿಯಲ್ಲಿ ನುಗ್ಗಿಬಂದ ಅಣ್ಣಪ್ಪಯ್ಯನವರ ವರಾಹ ರೂಪದ ಅಸ್ತ್ರವು ದುಷ್ಟರನ್ನು ಬಗ್ಗು ಬಡಿದ ಕಾರಣ ಇಂದಿಗೂ ವರಾಹದ ಬಗ್ಗೆ ಅಖಂಡ ಭಾರತ ಮಾತ್ರವಲ್ಲ ಭೂಮಿಯಲ್ಲೆಲ್ಲಾ ಅದರ ಬಗ್ಗೆ ಜನರಲ್ಲಿ ಭೀತಿ ಉಳಿದಿದೆ. ಅಧರ್ಮ, ಅನ್ಯಾಯ, ಅಸತ್ಯ ಉಲ್ಬಣಗೊಂಡಲ್ಲಿ ವರಾಹ ಸೇನೆಯು ಪುನಃ ಕಾಣಿಸಿಕೊಳ್ಳುತ್ತದೆ, ಎಲ್ಲರನ್ನೂ ಮೆಟ್ಟಿ ಕೋರೆ ದಾಡೆಯಲ್ಲಿ ತಿವಿದು ನುಚ್ಚು ನೂರು ಮಾಡುತ್ತದೆ ಎಂಬ ಭಯ ಇದೆ.


ಅಣ್ಣಪ್ಪಯ್ಯನವರೇ ತಮ್ಮನ್ನು ನಂಬಿದ ಭಕ್ತರಿಗೆ ಜ್ಞಾನ ರೂಪೀ "ಪಂಜು", ಸಾಧನೆಯ ದ್ಯೋತಕವಾದ "ಉರುಳಿಯನು" ಹಿಡಿದು ಸುತ್ತುತಲಿರುವ ಧೈವ "ಪಂಜುರ್ಲಿ" ಎಂದು ದಕ್ಷಿಣ ಕನ್ನಡದ ಮನೆಮನದಲ್ಲಿ ನೆಲೆಸಿಹರು. ಆರೋಗ್ಯ, ಕೃಷಿ, ವಾಣಿಜ್ಯ, ನ್ಯಾಯ, ಧರ್ಮ, ವೇದ, ತಂತ್ರ, ಮೀಮಾಂಸ, ವೈದ್ಯ, ಇತ್ಯಾದಿ ಎಲ್ಲಾ ಕ್ಷೇತ್ರದಲ್ಲೂ ೮೦೦ ವರ್ಷಗಳು ಜನರಿಗಾಗಿ ಜೀವಿಸಿ ಶ್ರಮಿಸಿದ್ದಾರೆ ಅಣ್ಣಪ್ಪಯ್ಯ ಯತಿವರೇಣ್ಯರು.


ಇದಕ್ಕೆ ಪ್ರಾಚೀನ ಸಿರಿಭೂವಲಯ ಗ್ರಂಥದಲ್ಲಿ ಕಾಲ ಗಣಿತದ ಆಧಾರದಲ್ಲಿ ಮುಂದಿನ ಭವಿಷ್ಯವಾಣಿ ನುಡಿದಿರುವ "ದಿವದಿಂದವತರಿಸುವ ಜಿನನಾಥನು ಹಂದಿಯ ವೇಷವ ಧರಿಸಿ.." ಎಂಬ ಪದ್ಯದ ತುಣುಕು ಸಿಗುತ್ತದೆ. ಇದರಿಂದ ಸಿರಿಭೂವಲಯವು ೨೦೦೦ ವರ್ಷಗಳಿಗಿಂತ ಹಳೆಯದ್ದು ಎಂಬುದು ಖಚಿತವಾಗುತ್ತದೆ. ಜೊತೆಗೆ ಅಣ್ಣಪ್ಪಯ್ಯ ಚರಿತೆಗೂ ಒಂದು ಮಹಾನ್ ಗ್ರಂಥದ ಆಧಾರ ಸಿಗುತ್ತದೆ.


🪷🪷🪷🪷🪷🪷🪷🪷🪷🪷🪷🪷🪷🪷🪷🪷


ಮಂಗಳಂ ಸಾಸಿರವೆರಡು ವರುಷದ ಹಿಂದೆ ಜನಿಸಿದವಗೇ..


ಮಂಗಳಂ ಸತ್ಯವೇ ಧೈವವೆಂದು ಲೋಕಕೆ ಸಾರಿದಾತನಿಗೇ..


ಮಂಗಳಂ ವಿಪ್ರಕುಲ ಚಾರಿತ್ರ್ಯನಿಗೇ ವೇದೋದ್ಧಾರಕ ಧರ್ಮರಕ್ಷಕ ನ್ಯಾಯಶೀಲನಿಗೇ..


ಮಂಗಳವ ಬೇಡುತ ಈ ಜನರಿಗೆ ನೀಡು ಸನ್ಮತಿಯ ಅಣ್ಣಾ..


ಮಂಗಳವ ನೀಡುತಿರು ಈ ಲೋಕದಲಿ ನೀನು ಧರ್ಮದಾ ಅಪ್ಪ..


ಮಂಗಳವ ಬೇಡುವೆನು ಈ ಕಥೆಯ ಸ್ವೀಕರಿಸಿ ಹರಸೆಲ್ಲ ಜನರನು ಓ ತಂದೆ ಅಣ್ಣಪ್ಪಾ ||


🪷🪷🪷🪷🪷🪷🪷🪷🪷🪷🪷🪷🪷🪷🪷🪷


- ಹೇಮಂತ್ ಕುಮಾರ್ ಜಿ.



🌼🌼🌼🌼🌼🌼🌼🌼🌼🌼🌼🌼🌼🌼🌼🌼🌼

ಪುಸ್ತಕ ಮತ್ತು ಅದರಲ್ಲಿರುವ ಪದ್ಯಗಳನ್ನು ಯಕ್ಷಗಾನ ಭಾಗವತಿಕೆಯ ರೂಪದಲ್ಲಿ ಚರಿತೆಯನ್ನು ಹಾಡಿರುವ ಸಿ.ಡಿ. ದೊರೆಯುವ ಸ್ಥಳ -


*ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ.*


*ದೂರವಾಣಿ ಸಂಖ್ಯೆ:* 0824-2283393, 2283399


*ಅಂತರ್ಜಾಲ ತಾಣ* : www.jnanashakthi.in


*ಫೇಸ್ಬುಕ್ ಪುಟ*: www.fb.com/sjsstemple


*ಮಿಂಚಂಚೆ ವಿಳಾಸ*: sjsstemple@gmail.com


*ನಕ್ಷೆ ವಿಳಾಸ*: https://goo.gl/maps/Pynk6xsUY5n



*ಇನ್ಸ್ಟಾ ಗ್ರಾಂ* https://instagram.com/sjsstemple?igshid=o2wqq3d38yq2

bottom of page